Posts

ಸರಸ್ವತಿ ನದಿ

  ಸರಸ್ವತಿ ಋಗ್ವೇದದ ಕಾಲದ ನದಿಯಾಗಿದೆ. ವೇದಕಾಲದ ನದಿಗಳಲ್ಲೆಲ್ಲಾ ಅತ್ಯಂತ ಶ್ರೇಷ್ಠ ನದಿ ಎಂದರೆ ಸರಸ್ವತಿ ನದಿ.  ವೇದಕಾಲದಲ್ಲಿ ಸರಸ್ವತಿ ನದಿಯು ಯಮುನಾ ಮತ್ತು ಸಟ್ಲೆಜ್ ನದಿಗಳ ನಡುವೆ ಹರಿಯುತ್ತಿತ್ತು ಎಂಬ ಚಿತ್ರಣ ಸಿಕ್ಕರೆ, ವೇದಕಾಲದ ನಂತರದ ಕಾಲದಲ್ಲಿ ಅಂದರೆ ಜೈಮಿನಿಯ ಭಾರತ, ಮಹಾಭಾರತ ಮುಂತಾದ ಗ್ರಂಥಗಳಲ್ಲಿ ಸರಸ್ವತಿ ನದಿಯು ಮರುಭೂಮಿಯಲ್ಲಿ ಒಣಗಿತು ಎಂಬ ವಿವರವಿದೆ.  ಅಂದರೆ ಸರಸ್ವತಿ ನದಿಯನ್ನು ಇಂದಿನ ಚೋಲಿಸ್ತಾನ್ ಮರುಭೂಮಿಯ ಮಧ್ಯೆ ಹರಿಯುತ್ತಿದ್ದ ಹಕ್ರಾ-ಘಗ್ಗರ್ ನದಿಯ ಬತ್ತಿದ ಪಾತ್ರದೊಂದಿಗೆ ಸಮೀಕರಿಸಲಾಗಿದೆ.   ಮೊದಲು ದೇವತೆಯಾದ ಮಾತೆ ಸರಸ್ವತಿಯೇ ನದೀರೂಪ ತಾಳಿ ಇಲ್ಲಿ ಆವೀರ್ಭವಿಸಿದ್ದಾಳೆ ಎಂದು ತಿಳಿಯಲಾಗಿತ್ತು. ನಂತರ ನದಿಯು ಮಾತೆ ಸರಸ್ವತಿಯ ಜೊತೆಗಿನ ಸಂಬಂಧ ಕಡಿದುಕೊಂಡು ಬೇರೆಯದೇ ರೀತಿಯಲ್ಲಿ ಪ್ರಸಿದ್ಧವಾದುದೂ ಅಲ್ಲದೇ ಬೇರೆ ಅರ್ಥವನ್ನೂ ಸಹ ಪಡೆದುಕೊಂಡಿತು.   ** ಸಂಸ್ಕೃತದಲ್ಲಿ 'ಸರಸ್ಸು' ಎಂದರೆ ನೀರಿನ ಹೊಂಡ ಅಂತರ್ಥ.  ** ಸರಸ್ಸಿನ ಸ್ತ್ರೀ ರೂಪದ ಅರ್ಥವೆಂದರೆ 'ಹರಿಯದೇ ನಿಂತ ನೀರು' ಅಥವಾ 'ಕೆಸರಿನ ನೆಲ' ಎಂದಾಗುತ್ತದೆ.  ** ಋಗ್ವೇದದ ಸರಸ್ವತಿ ಪದ  ಬಹುಶಃ 'ಹರಿಯದೇ ನಿಂತ ನೀರು' ಎಂಬರ್ಥ ಕೊಡುತ್ತದೆ ಅಂತ ವಿದ್ವಾಂಸರು ಊಹಿಸಿಕೊಂಡಿದ್ದಾರೆ.           ಸರಸ್ವತಿ ಸಪ್ತ ಮಹಾನದಿಗಳಲ್ಲಿ ಒಂದು.   ಇದು ಗುಪ್ತಗಾಮ...

ತ್ರಿಶಂಕು ಸ್ವರ್ಗ

  ಸ್ವರ್ಗ-ನರಕ ಎಂದರೆ ಎಲ್ಲರಿಗೂ ಗೊತ್ತು. ನಾವು ಸತ್ತ ಮೇಲೆ ಸೇರುವ ಜಾಗ ಅದು. ಹಾಗಂತ ಪರ್ಮನೆಂಟಾಗಿ ಅಲ್ಲೇ ಉಳಿಯಲೂ ಸಹ ಆಗುವುದಿಲ್ಲ. ನಾವು ಮಾಡಿದ್ದ ಪಾಪವೋ ,  ಪುಣ್ಯವೋ ಕರಗಿದ ಮೇಲೆ ಮತ್ತೆ ಭೂಮಿ ಮೇಲೆ ಅವತರಿಸಬೇಕು. ಆದರೆ ಸ್ವರ್ಗ ಅಥವಾ ನರಕ ಸೇರಲು ಇರುವ ದಾರಿಯೆಂದರೆ ಮೃತ್ಯು ಒಂದೇ. ಆದರಿಲ್ಲಿ ತ್ರಿಶಂಕು ಎಂಬ ಮಹಾರಾಜನಿಗೆ ಶರೀರ ಸಮೇತವಾಗಿಯೇ ಸ್ವರ್ಗ ಸೇರಬೇಕು ಅಂತಾಸೆಯಾಗುತ್ತದೆ. ಅವನಿಗೆ ತನ್ನ ದೇಹದ ಮೇಲಿದ್ದ ಮೋಹ ಅಂಥಾದ್ದು. ತನ್ನ ದೇಹವನ್ನು ತಾನೇ ಮೋಹಿಸುತ್ತಿದ್ದ ,  ತನ್ನ ಸೌಂದರ್ಯವನ್ನು ನೋಡಿ ತಾನೇ ಹೆಮ್ಮೆ ಪಡುತ್ತಿದ್ದ ತ್ರಿಶಂಕುವಿಗೆ ಒಮ್ಮೆ ತನ್ನ ಈ ಸುಂದರ ಶರೀರದೊಡನೆಯೇ ಸ್ವರ್ಗಕ್ಕೆ ಹೋಗಬೇಕು ಅಂತಾಸೆಯಾಗುತ್ತದೆ.  ಅದೆಂಥಾ ಆಸೆಯೋ ಗೊತ್ತಿಲ್ಲ... ಆದರೆ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋಗುವಾಗಲೇ ನೂರಾರು ಕಟ್ಟಳೆ-ಕಾನೂನು ಇರುವ ನಮಗೆ ಬೇರೊಂದು ಲೋಕ ಪ್ರವೇಶಿಸುವಾಗ ಎದುರಾಗುವುದಿಲ್ಲವೇ ?  ಹಾಗಾಗಿಯೇ ತ್ರಿಶಂಕುವಿನ ಆಸೆಯನ್ನು ಅವನ ಕುಲಗುರುವಾದ ವಸಿಷ್ಠರು ಒಂದೇ ಬಾರಿಗೆ ನಿರಾಕರಿಸಿಬಿಡುತ್ತಾರೆ. ಗುರುಗಳು ಹೇಳಿದ್ದು ತನ್ನ ಒಳ್ಳೆಯದಕ್ಕೆ ಅಂತವನಿಗೆ ಅರ್ಥವಾಗುವುದಿಲ್ಲ. ಏಕೆಂದರೆ ಹಸಿವು-ನೀರಡಿಕೆ-ನಿದ್ರೆಯ ಬಾಧೆ ಇರುವ ಈ ದೇಹವನ್ನು ಪರಮ ಪವಿತ್ರ ಸ್ವರ್ಗಕ್ಕೆ ಒಯ್ಯಬಾರದಲ್ಲವೇ ?  ಸ್ವರ್ಗವೆಂದರೆ ಮನಸ್ಸಿನ ಕಾಮನೆಗಳ ಪೂರ್ತಿಗಾಗಿ ಹೊರತೂ ದೇಹಕಾಮನೆಗಳಿಗಲ್ಲ. ...

ಯವನಾಶ್ವ

  " ಗರ್ಭ ಧರಿಸಿದ ಪುರುಷ " ಮಕ್ಕಳನ್ನು ಹೆರುವುದರಿಂದಲೇ ಹೆಣ್ಣಿಗೆ ಸಮಾಜದಲ್ಲಿ ಪೂಜ್ಯನೀಯ ಸ್ಥಾನವಿದೆ. ಆಕೆಯ ದೇಹವೂ ಸಂತಾನಾಭಿವೃದ್ಧಿಗೆ ಪೂರಕವಾಗಿದೆ. ಆದರೆ ಒಬ್ಬ ಪುರುಷ ಮಗುವನ್ನು ಹೆತ್ತರೆ ಹೇಗಿರುತ್ತದೆ? ಮೊದಲಿಗೆ ಆತ ಮಗುವನ್ನು ಪ್ರಸವಿಸುವುದು ಹೇಗೆ? ಮಗು ಹುಟ್ಟಿದ ನಂತರ ಹಾಲೂಡಿಸುವುದು ಹೇಗೆ? ಎಂಬೆಲ್ಲಾ ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ. ಆದರೆ ಯವನಾಶ್ವ ಎಂಬ ರಾಜ ತಾನೇ ಮಗುವನ್ನು ತನ್ನ ಹೊಟ್ಟೆಯಲ್ಲಿ ಹೊತ್ತು, ನಂತರ ಹೆತ್ತು ಆ ಮಗುವಿನ ತಂದೆ ಮತ್ತು ತಾಯಿ ಎನಿಸಿಕೊಂಡಿದ್ದಾನೆ. ಬಹಳ ಕಾಲದ ಹಿಂದೆ ಯವನಾಶ್ವ ಎಂಬ ರಾಜನಿಗೆ ಸಂತಾನ ಇರಲಿಲ್ಲ. ಅದಕ್ಕಾಗಿ ಆತ ಮಾಡದ ಪ್ರಯತ್ನಗಳೇ ಇರಲಿಲ್ಲ. ಆತನೂ, ಆತನ ಪತ್ನಿಯೂ ಸೇರಿ ಅನೇಕ ಯಜ್ಞ-ಯಾಗಾದಿಗಳನ್ನು, ಪೂಜೆ-ಪುನಸ್ಕಾರಗಳನ್ನು ಮಾಡಿದ್ದರು. ಆದರೂ ಅವರಿಗೆ ಸಂತಾನ ಲಭಿಸಿರಲಿಲ್ಲ.  ಈ ವಿಷಯವಾಗಿ ಮಹಾರಾಜನು ಬಹಳ ಚಿಂತಿತನಾಗಿದ್ದನು. ಈ ವಿಷಯ ರಾಜನ ನಿತ್ಯ ಜೀವನದಲ್ಲಿಯೂ ಬಾಧಿಸತೊಡಗಿತು. ಇದರಿಂದ ರಾಜನು ರಾಜ್ಯದ ಆಡಳಿತದಲ್ಲಿಯೂ ಮನಸ್ಸಿಲ್ಲದವನಾಗಿ ಹೆಚ್ಚಿನ ಸಮಯ ಕಾಡಿನಲ್ಲಿಯೇ ಕಳೆಯುತ್ತಿದ್ದನು.  ಒಮ್ಮೆ ಹೀಗೆಯೇ ಕಾಡಿನಲ್ಲಿ ಸಂಚರಿಸುತ್ತಿದ್ದಾಗ ಕಾಡಿನ ಒಳ ಭಾಗಕ್ಕೆ ಹೋಗಿ ಬಿಡುತ್ತಾನೆ. ಹಸಿವು-ಬಾಯಾರಿಕೆಗಳು ಅವನನ್ನು ಕಾಡಲು ಶುರು ಮಾಡುತ್ತವೆ. ಆದರೆ ಹತ್ತಿರದಲ್ಲಿ ಎಲ್ಲಿಯೂ ಆತನ ದಾಹ ತಣಿಸುವ ನೀರಿನ ಆಕರಗಳು ಕಾಣಸಿಗುವುದಿಲ್ಲ.  ಹಾಗಾಗಿ ನೀರನ್...

ಸ್ವರ್ಗವನ್ನೇ ತಿರಸ್ಕರಿಸಿದ ಮುದ್ಗಲ

  ನಮಗೆಲ್ಲರಿಗೂ ಸಾಮಾನ್ಯವಾಗಿ ಒಂದು ಆಸೆ ಇದ್ದೇ ಇರುತ್ತದೆ. ಸತ್ತ ಮೇಲೆ ಸ್ವರ್ಗ ಸೇರಬೇಕೆಂದು ಹೆಚ್ಚು ಕಡಿಮೆ ನಾವೆಲ್ಲರೂ ಬಯಸುತ್ತೇವೆ.‌ ಈ ಬಗ್ಗೆ ಒಂದು ಹಾಸ್ಯವಿದೆ. "ಜನರು ಸ್ವರ್ಗ ಬೇಕೆಂದು ಬಯಸುತ್ತಾರೆ, ಆದರೆ ಸಾಯಲು ನಿರಾಕರಿಸುತ್ತಾರೆ" ಅಂತ. ಹೀಗಿರುವಾಗ ನಮಗೇನಾದರೂ ಸಶರೀರವಾಗಿಯೇ ಸ್ವರ್ಗಕ್ಕೆ ಹೋಗುವ ಅವಕಾಶ ಸಿಕ್ಕರೆ? ಸಾಯುವ ಪ್ರಮೇಯವೇ ಇಲ್ಲದೇ ಸೀದಾ ಪುಷ್ಪಕ ವಿಮಾನ ಹತ್ತಿ‌ ಸ್ವರ್ಗದಲ್ಲಿ ಲ್ಯಾಂಡ್ ಆಗಬಹುದು. ಆದರೆ 'ಮುದ್ಗಲ' ಎಂಬ ಮುನಿಯು ತನಗೆ ಸಶರೀರವಾಗಿಯೇ ಸ್ವರ್ಗಕ್ಕೆ ಹೋಗುವ ಅವಕಾಶ ಸಿಕ್ಕಾಗಲೂ ಸಹ ನಿರಾಕರಿಸಿ ಎಲ್ಲರನ್ನೂ ದಂಗುಬಡಿಸುತ್ತಾನೆ. ಸ್ವರ್ಗಕ್ಕೆ ಹೋಗುವ ಅವಕಾಶ ಸಿಕ್ಕರೆ ಯಾರು ತಾನೇ ಬಿಡುತ್ತಾರೆ? ಸ್ವರ್ಗಕ್ಕೆ ಹೋಗಲು ಜನರು ಎಷ್ಟೆಷ್ಟೋ ತಪಸ್ಸು ಮಾಡುತ್ತಾರೆ. ದಾನ, ಧರ್ಮ, ಪುಣ್ಯಕಾರ್ಯಗಳನ್ನು ಮಾಡುತ್ತಾರೆ. ಶಾಸ್ತ್ರದಲ್ಲಿ ಹೇಳಿರುವುದನ್ನು, ಪಂಡಿತರು ಹೇಳಿದ್ದನ್ನು ಒಂದೂ ಬಿಡದೇ ಅನುಷ್ಠಾನಗೊಳಿಸುತ್ತಾರೆ. ಇಷ್ಟಾಗಿಯೂ ಅವರಿಗೆ ಸ್ವರ್ಗ ಪ್ರಾಪ್ತಿಯಾಗುವುದಿಲ್ಲ. ಆದರೆ ಅದ್ಯಾವುದೂ ಮಾಡದ ಮುದ್ಗಲನಿಗೆ ತಾನಾಗಿಯೇ ಈ ಅವಕಾಶ ಸಿಕ್ಕರೂ ಸಹ ಆತ ನಿರಾಕರಿಸುತ್ತಾನೆ. ನಾವಾಗಿದ್ದರೆ ಖಂಡಿತಾ ಈ ಅವಕಾಶವನ್ನು ಬಿಡುತ್ತಿರಲಿಲ್ಲ. ಅಲ್ಲವೇ? ಮುದ್ಗಲ ಒಬ್ಬ ಬ್ರಹ್ಮರ್ಷಿಯಾಗಿದ್ದ.  ಆದರೂ ಸಾಮಾನ್ಯನಂತೆ ಜೀವನ ನಡೆಸುತ್ತಿದ್ದ. ಆತನ ಜೀವನ ಬಹಳ ಸರಳವಾಗಿತ್ತು. ಹೊಲಗದ್ದೆಗಳಲ್ಲಿ ರೈ...

ತ್ರಿದೇವಿಯರನ್ನು ಸೋಲಿಸಿದ ಅನಸೂಯಾ

  ಸಪ್ತ ಮರ್ಷಿಗಳಲ್ಲಿ ಒಬ್ಬರಾದ ಅತ್ರಿ ಮಹರ್ಷಿ ಮತ್ತು ಅವರ ಪತ್ನಿ ಅನುಸೂಯಾರದ್ದು ಅನುರೂಪದ ದಾಂಪತ್ಯ. ಅನುಸೂಯಾಳ ಪತಿ ಭಕ್ತಿ ಲೋಕದಲ್ಲೆಡೆ ಪ್ರಸಿದ್ಧಿ ಹೊಂದಿತ್ತು. ಆದರೆ ಮಕ್ಕಳಿರದ ಕೊರಗು ಅವರನ್ನು ಸದಾ ಕಾಡುತ್ತಿತ್ತು. ಸಂತಾನಕ್ಕಾಗಿ ದೇವರಲ್ಲಿ ಪ್ರತಿನಿತ್ಯ ಬೇಡುತ್ತಿದ್ದರು. ಮಾಡದ ಪೂಜೆಯಿಲ್ಲ, ಹೋಮ-ಹವನವಿರಲಿಲ್ಲ. ಆದರೂ ಅವರಿಗೆ ಇನ್ನೂ ಸಂತಾನ ಪ್ರಾಪ್ತಿಯಾಗಿರಲಿಲ್ಲ. ಈ ವಿಷಯ ತಿಳಿದುಕೊಂಡ ತ್ರಿಮೂರ್ತಿಗಳ ಪತ್ನಿಯರಾದ ಲಕ್ಷ್ಮಿ, ಸರಸ್ವತಿ ಮತ್ತು ಪಾರ್ವತಿಯರು ಆ ದಂಪತಿಗಳಿಗೆ ಸಂತಾನ ಕರುಣಿಸಬೇಕೆಂದು ತೀರ್ಮಾನಿಸಿದರು. ಆದರೆ ಅದಕ್ಕೂ ಮೊದಲು ಅನಸೂಯಾಳ ಪತಿಭಕ್ತಿಯನ್ನೊಮ್ಮೆ ಪರೀಕ್ಷಿಸಲು ತೀರ್ಮಾನಿಸಿದರು.‌ ಅದಕ್ಕಾಗಿ ತಮ್ಮ ಪತಿಯರನ್ನು ಅನಸೂಯಾಳ ಬಳಿ ಮುನಿ ವೇಷಧಾರಿಗಳಾಗಿ ಕಳಿಸಿ ನಿರ್ವಸ್ತ್ರ ಭಿಕ್ಷೆ ಕೇಳಲು ಹೇಳಿದರು. ಅಂದರೆ ವಸ್ತ್ರ ಧರಿಸದೇ ಮಾಡುವ ದಾನ. ಅದರಂತೆ ತ್ರಿಮೂರ್ತಿಗಳು ಋಷಿಗಳ ವೇಷ ಧರಿಸಿ ಬಂದು ಅನಸೂಯಾಳ ಬಳಿ ನಿರ್ವಸ್ತ್ರ ಭಿಕ್ಷೆ ಕೇಳಿದರು. ಅನಸೂಯಾಳಿಗೆ ಸಿಡಿಲೆರಗಿದಂತಾಯಿತು. ಇತ್ತ ಮುನಿಗಳಿಗೆ ಭಿಕ್ಷೆ ಇಲ್ಲ ಎನ್ನುವಂತಿಲ್ಲ. ಹಾಗೆಂದು ನಿರ್ವಸ್ತ್ರವಾಗಿ ಇವರ ಮುಂದೆ ಬರುವ ಹಾಗೆಯೂ ಇಲ್ಲ. ವಸ್ತ್ರವಿಲ್ಲದೇ ಇವರ ಮುಂದೆ ಬಂದರೆ ಕೂಡಲೇ ತನ್ನ ಪತಿವ್ರತಾ ಧರ್ಮಕ್ಕೆ ಅಪಚಾರವಾಗುತ್ತದೆ. ಇಷ್ಟು ದಿನ ನಿಯಮ ಬಿಡದೇ ಪಾಲನೆ ಮಾಡಿಕೊಂಡು ಬಂದವಳು ತಾನು. ಈಗ ಏಕಾಏಕಿ ಬಿಡಲಾಗೋಲ್ಲ. ಹಾಗೂ ಮಾಡುವಂತಿಲ್ಲ,...

ಹಿಡಿಂಬೆ

  ಸಾಮಾನ್ಯವಾಗಿ ನಮಗೆ ಏನಾದರೂ ತೊಂದರೆಯಾದರೆ ಅದು ಹೊರಗಿನವರಿಂದ ಎಂದು ನಮ್ಮ ಭಾವನೆ. ಹೊರಗಿನವರ್ಯಾರೋ ನಮಗೆ ತೊಂದರೆ ಕೊಟ್ಟಾಗ ನಮ್ಮವರು ನಮ್ಮನ್ನು ರಕ್ಷಿಸುತ್ತಾರೆಂಬ ನಂಬಿಕೆ ನಮಗೆ ಯಾವಾಗಲೂ ಇರುತ್ತದೆ.  ಆದರೆ ನಮ್ಮವರೇ ನಮಗೆ ತೊಂದರೆ ಕೊಟ್ಟಾಗ ನಾವು ಯಾರನ್ನು ನಂಬಬೇಕು. ಆಗ ಅನಿವಾರ್ಯವಾಗಿ ಹೊರಗಿನವರನ್ನೇ ನಮ್ಮ ರಕ್ಷಕರು ಎಂದು ತಿಳಿಯಬೇಕಾಗುತ್ತದೆ.  ಹಿಡಿಂಬೆಗೂ ಈ ಅನುಭವವಾಯ್ತು. ತಾನು, ತನ್ನಣ್ಣ ಇಷ್ಟೇ ಪ್ರಪಂಚ ಅವಳದ್ದು. ಮಾನವರ ವಾಸನೆ ಬಂದಾಗ ಹೋಗಿ ಹಿಡಿದು ತರುವುದು, ತಿನ್ನುವುದು ಇಷ್ಟರಲ್ಲಿಯೇ ಬದುಕು ಸಾಗಿತ್ತು. ಆರಕ್ಕೆ ಏರಿರಲಿಲ್ಲ.. ಮೂರಕ್ಕೆ ಇಳಿದಿರಲಿಲ್ಲ.. ಹಿಡಿಂಬನೇನೋ ಗಂಡಸು ಹೇಗೋ ಬದುಕಿಕೊಂಡಿದ್ದ..  ಆದರೆ ಹಿಡಿಂಬೆ ಹೆಂಗಸು..  ಏಕತಾನತೆಯ ಈ ಬದುಕು ಅವಳಿಗೆ ಚಿಟ್ಟು ಹಿಡಿಸಿತ್ತು.. ಮದುವೆಯಿಲ್ಲ, ಸಂಗಾತಿಯಿಲ್ಲ, ಮಕ್ಕಳಿಲ್ಲ.. ಇದೂ ಒಂದು ಬದುಕಾ ಅಂತ ಅವಳಿಗೆ ಬಹಳ ಕಾಡುತ್ತಿತ್ತು..  ಅದರಲ್ಲೂ ಈ ಸಂಗಾತಿಯ ವ್ಯಾಮೋಹ ಬಹಳ ಅಪಾಯಕಾರಿಯಾದದ್ದು. ಅದನ್ನು ಅರ್ಥ ಮಾಡಿಕೊಳ್ಳುವವರಿಂದಷ್ಟೇ ಅರ್ಥ ಮಾಡಿಕೊಳ್ಳಲು ಸಾಧ್ಯ. ಈ ವ್ಯಾಮೋಹ ಮೂಡಿದವರು ಯಾರೆಂದರೆ ಯಾರನ್ನೂ ಸಹ ಲೆಕ್ಕಿಸೋಲ್ಲ.. ಹೆತ್ತ ತಂದೆ ತಾಯಿಯನ್ನೂ ಸಹ..  ಇಂತಹಾ ಸಂದರ್ಭದಲ್ಲಿ ಆಹಾರಕ್ಕಾಗಿ ಅಲೆಯುತ್ತಿರುವ ಹಿಡಿಂಬೆಗೆ ಭೀಮ ಕಾಣಿಸುತ್ತಾನೆ. ಮರಳುಗಾಡಿನಲ್ಲಿ ಓಯಸಿಸ್ ಸಿಕ್ಕ ಹಾಗೆ ಆಗುತ್ತದೆ ಅವಳಿಗೆ. ವಾರಾ...

ಏಕಲವ್ಯ

  ಮಹಾಭಾರತ ಎಂದರೆ ಎಲ್ಲರೂ ಬರೇ ದಾಯಾದಿಗಳ ದ್ವೇಷದ ಕಥೆ ಅಂತಲೇ ತಿಳಿಯುತ್ತಾರೆ. ಅದರ ಹಿಂದಿನ ಸತ್ಯ ಯಾರಿಗೂ ಬೇಕಿಲ್ಲ. ಏಕಲವ್ಯನ ಬಗ್ಗೆಯೂ ಹಾಗೆಯೇ ತಿಳಿಯುತ್ತಾರೆ.  ದ್ರೋಣರು ಅರ್ಜುನನ ಮೇಲಿನ ಪ್ರೀತಿಯಿಂದ, ತಮ್ಮ ಮೆಚ್ಚಿನ ಶಿಷ್ಯನಾದ ಅರ್ಜುನನನ್ನು ಮಾತ್ರವೇ ಅಪ್ರತಿಮ ಬಿಲ್ಲುಗಾರನನ್ನಾಗಿಸುವ ಏಕಮಾತ್ರ ಕಾರಣದಿಂದಾಗಿಯೇ ಏಕಲವ್ಯನಿಂದ ಅವನ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಪಡೆದರು ಅಂತಲೇ ತಿಳಿದಿದ್ದಾರೆ.  ನಂತರ ಮಹಾಭಾರತವನ್ನು ತಮ್ಮ ತಮ್ಮ ದೃಷ್ಟಿಕೋನದಿಂಧ ವಿಶ್ಲೇಷಿಸಿದ ಬೇರೆ ಬೇರೆ ಕಾಲಘಟ್ಟದ ಎಲ್ಲ ಲೇಖಕರೂ ಕೂಡ ಈ ವಿಷಯದ ಪ್ರಸ್ತಾಪ ಬಂದಾಗ ಮೂಲದಲ್ಲಿರುವ ಹಾಗೆಯೇ ಬಿಂಬಿಸುತ್ತಾ ಬಂದಿದ್ದಾರೆ.  ಆದರೆ ವಾಸ್ತವ ಬೇರೆಯೇ ಇದೆ.  ಮಹಾಭಾರತದ ಸಮಯದಲ್ಲಿ ಹಸ್ತಿನಾವತಿಯನ್ನು ದುರ್ಯೋಧನ ಆಳುತ್ತಿದ್ದರೆ, ಎಲ್ಲಾ ರೀತಿಯಿಂದಲೂ ಅರ್ಹರಾಗಿದ್ದ ಪಾಂಡವರು ಕಾಡಿನಲ್ಲಿದ್ದರು. ದುರ್ಯೋಧನನ ನಿಯಮದಂತೆ ಪಾಂಡವರು 12 ವರ್ಷಗಳ ವನವಾಸ, 1 ವರ್ಷದ ಅಜ್ಞಾತವಾಸ ಮುಗಿಸಿ ಬಂದರೂ ದುರ್ಯೋಧನ ಅವರಿಗೆ ಪಿಳ್ಳೆ ನೆವ ಹೇಳಿದ ಹೊರತು ಅವರ ನೆಲ ಅವರಿಗೆ ಕೊಡಲಿಲ್ಲ. ಹಾಗಾಗಿ ಇಬ್ಬರೂ ರಾಜಿಯಾಗದೇ ಇಬ್ಬರ ನಡುವೆ ಯುದ್ಧ ನಡೆಯಿತು. ಹಾಗಾದರೆ ಕೇವಲ ನೆಲಕ್ಕಾಗಿ ಯುದ್ಧ ನಡೆಯಿತೇ?  ಖಂಡಿತಾ ಇಲ್ಲ.  ಒಂದು ವೇಳೆ ಪಾಂಡವರು ತಮ್ಮ ನೆಲವನ್ನು ವಾಪಸ್ ಪಡೆಯದಿದ್ದರೆ ಯುಗಾಂತರದವರೆಗೂ ದುರ್ಯೋಧನನ ವಂಶಸ್ಥರೇ ಭರತ ಭೂಮಿಯನ್ನು ...