Posts

Showing posts with the label ekalavya

ಏಕಲವ್ಯ

  ಮಹಾಭಾರತ ಎಂದರೆ ಎಲ್ಲರೂ ಬರೇ ದಾಯಾದಿಗಳ ದ್ವೇಷದ ಕಥೆ ಅಂತಲೇ ತಿಳಿಯುತ್ತಾರೆ. ಅದರ ಹಿಂದಿನ ಸತ್ಯ ಯಾರಿಗೂ ಬೇಕಿಲ್ಲ. ಏಕಲವ್ಯನ ಬಗ್ಗೆಯೂ ಹಾಗೆಯೇ ತಿಳಿಯುತ್ತಾರೆ.  ದ್ರೋಣರು ಅರ್ಜುನನ ಮೇಲಿನ ಪ್ರೀತಿಯಿಂದ, ತಮ್ಮ ಮೆಚ್ಚಿನ ಶಿಷ್ಯನಾದ ಅರ್ಜುನನನ್ನು ಮಾತ್ರವೇ ಅಪ್ರತಿಮ ಬಿಲ್ಲುಗಾರನನ್ನಾಗಿಸುವ ಏಕಮಾತ್ರ ಕಾರಣದಿಂದಾಗಿಯೇ ಏಕಲವ್ಯನಿಂದ ಅವನ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಪಡೆದರು ಅಂತಲೇ ತಿಳಿದಿದ್ದಾರೆ.  ನಂತರ ಮಹಾಭಾರತವನ್ನು ತಮ್ಮ ತಮ್ಮ ದೃಷ್ಟಿಕೋನದಿಂಧ ವಿಶ್ಲೇಷಿಸಿದ ಬೇರೆ ಬೇರೆ ಕಾಲಘಟ್ಟದ ಎಲ್ಲ ಲೇಖಕರೂ ಕೂಡ ಈ ವಿಷಯದ ಪ್ರಸ್ತಾಪ ಬಂದಾಗ ಮೂಲದಲ್ಲಿರುವ ಹಾಗೆಯೇ ಬಿಂಬಿಸುತ್ತಾ ಬಂದಿದ್ದಾರೆ.  ಆದರೆ ವಾಸ್ತವ ಬೇರೆಯೇ ಇದೆ.  ಮಹಾಭಾರತದ ಸಮಯದಲ್ಲಿ ಹಸ್ತಿನಾವತಿಯನ್ನು ದುರ್ಯೋಧನ ಆಳುತ್ತಿದ್ದರೆ, ಎಲ್ಲಾ ರೀತಿಯಿಂದಲೂ ಅರ್ಹರಾಗಿದ್ದ ಪಾಂಡವರು ಕಾಡಿನಲ್ಲಿದ್ದರು. ದುರ್ಯೋಧನನ ನಿಯಮದಂತೆ ಪಾಂಡವರು 12 ವರ್ಷಗಳ ವನವಾಸ, 1 ವರ್ಷದ ಅಜ್ಞಾತವಾಸ ಮುಗಿಸಿ ಬಂದರೂ ದುರ್ಯೋಧನ ಅವರಿಗೆ ಪಿಳ್ಳೆ ನೆವ ಹೇಳಿದ ಹೊರತು ಅವರ ನೆಲ ಅವರಿಗೆ ಕೊಡಲಿಲ್ಲ. ಹಾಗಾಗಿ ಇಬ್ಬರೂ ರಾಜಿಯಾಗದೇ ಇಬ್ಬರ ನಡುವೆ ಯುದ್ಧ ನಡೆಯಿತು. ಹಾಗಾದರೆ ಕೇವಲ ನೆಲಕ್ಕಾಗಿ ಯುದ್ಧ ನಡೆಯಿತೇ?  ಖಂಡಿತಾ ಇಲ್ಲ.  ಒಂದು ವೇಳೆ ಪಾಂಡವರು ತಮ್ಮ ನೆಲವನ್ನು ವಾಪಸ್ ಪಡೆಯದಿದ್ದರೆ ಯುಗಾಂತರದವರೆಗೂ ದುರ್ಯೋಧನನ ವಂಶಸ್ಥರೇ ಭರತ ಭೂಮಿಯನ್ನು ...