Posts

Showing posts with the label vathapi jeernobhava

ವಾತಾಪಿ ಜೀರ್ಣೋಭವ

Image
  ಸಾಮಾನ್ಯವಾಗಿ ನಮ್ಮ ಸಾಹಿತಿಗಳು ತಮ್ಮ ಕಥೆ-ಕಾದಂಬರಿಗಳಲ್ಲಿ ಹೆಂಡತಿಯನ್ನು ಹಣಕ್ಕಾಗಿ, ಮತ್ತೊಂದಕ್ಕಾಗಿ ಅಥವಾ ಅನುಮಾನಪಟ್ಟು ಪೀಡಿಸುವ ಗಂಡಂದಿರ ಬಗ್ಗೆ ಮಾತ್ರವೇ ಬರೆಯುತ್ತಾರೆ. ಆದರೆ ಗಂಡನನ್ನು ಸಹ ಪೀಡಿಸುವ ಹೆಂಡತಿಯರು ಇರುತ್ತಾರೆ ಎನ್ನುವುದು ಗೊತ್ತೇ? ಹೌದು.  ಪ್ರಾಪಂಚಿಕ ಸುಖ-ಸಂಪತ್ತಿಗಾಗಿ, ಐಷಾರಾಮದ ವಸ್ತುಗಳಿಗಾಗಿ ಪೀಡಿಸುವ ಪತ್ನಿಯರು ಹಿಂದೆಯೂ ಇದ್ದರು, ಈಗಲೂ ಇದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಪುರಾಣದ ಋಷಿಮುನಿಗಳಿಗೂ ಈ ಕಾಟ ತಪ್ಪಿರಲಿಲ್ಲ ಎಂದರೆ ಆಶ್ಚರ್ಯವಾಗುತ್ತದೆ ಅಲ್ಲವೇ? ಮುನಿಜನರೇ ಇದಕ್ಕೆ ಬಲಿಯಾದರೆ ಸಾಮಾನ್ಯ ಜನರ ಪಾಡೇನು ಎನಿಸುತ್ತದೆ. ಒಮ್ಮೆ ಸರ್ವಸಂಗ ಪರಿತ್ಯಾಗಿಗಳಾದ ಅಗಸ್ತ್ಯ ಮಹರ್ಷಿಗಳಿಗೂ ಸಹ ತಮ್ಮ ಹೆಂಡತಿಗಾಗಿ ಈ ಕಾರ್ಯ ಮಾಡಬೇಕಾಗಿ ಬಂದಿತ್ತು. ಘಟನೆ ಹೀಗಿದೆ: ಅಗಸ್ತ್ಯ ಮುನಿಗಳು ತಮ್ಮ ತಪಸ್ಸಿಗಾಗಿ ಕಾಡಿನ ದಾರಿಯಲ್ಲಿ ನಡೆಯುತ್ತಿದ್ದಾಗ ಒಂದು ಮರದಲ್ಲಿ ತಲೆಕೆಳಕಾಗಿ ನೇತಾಡುತ್ತಿದ್ದ ಕೆಲವು ಆತ್ಮಗಳು ಕಾಣ ಸಿಗುತ್ತವೆ. ಅವರೆಲ್ಲಾ ಯಾರೆಂದು ವಿಚಾರಿಸಿದಾಗ ಆ ಆತ್ಮಗಳು ತಮ್ಮ ಪೂರ್ವಜರೇ ಎಂದು ಗೊತ್ತಾಗಿ ಆಘಾತವಾಗುತ್ತದೆ ಮುನಿಗಳಿಗೆ. ಆದರೆ ಅವರುಗಳು ಹೀಗೆ ಯಾಕೆ ನೇತಾಡುತ್ತಿದ್ದಾರೆ ಎಂದು ಅರ್ಥವಾಗದೇ ಅವರನ್ನು ವಿಚಾರಿಸಿದಾಗ ಅದಕ್ಕೆ ಕಾರಣ ತಾನೇ ಎಂದು ತಿಳಿಯುತ್ತದೆ.  ತಾನು ಮದುವೆಯಾಗದೇ, ತನಗೆ ಮಕ್ಕಳಾಗದೇ ಇರುವುದರಿಂದ ಈ ಆತ್ಮಗಳಿಗೆ ಆತ್ಮ ಸಾಕ್ಷಾತ್ಕಾರವಾಗಿಲ್ಲ ಎಂದು ಅರ...