Posts

Showing posts with the label nahusha

ನಹುಷ

Image
ಯಾರೇ ಆಗಲಿ ಅಧಿಕಾರದಲ್ಲಿದ್ದಾಗ ಅದರ ಮಿತಿಯರಿತು ಜವಾಬ್ದಾರಿ ವಹಿಸಿದರೆ ಕ್ಷೇಮ. ಇಲ್ಲದಿದ್ದರೆ ಅದೇ ಅಧಿಕಾರದಿಂದಲೇ ವ್ಯಕ್ತಿಯ ವ್ಯಕ್ತಿತ್ವ ಪಾತಾಳ ತಲಪುತ್ತದೆ.  ಆದರೆ ನಮ್ಮ ಸುತ್ತಮುತ್ತ ನಿಜವಾಗಿ ನಡೆಯುತ್ತಿರುವುದೇನೆಂದರೆ ಅಧಿಕಾರ ಸಿಕ್ಕ ತಕ್ಷಣ ಜನರು ಎಲ್ಲವನ್ನೂ ಮರೆತು ತಮ್ಮ ಶತೃಗಳ ದಮನಕ್ಕೆ ನಿಂತುಬಿಡುತ್ತಾರೆ. ಅಧಿಕಾರ ಎನ್ನುವುದು ಎಂದಿಗೂ ಶಾಶ್ವತವಲ್ಲ. ಇಂದ್ರನಾದರೂ ಚಂದ್ರನಾದರೂ ಒಂದಲ್ಲ ಒಂದು ದಿನ ಅಧಿಕಾರದಿಂದ ಕೆಳಗೆ ಇಳಿಯಲೇಬೇಕು.  ಅದಕ್ಕಾಗಿ ಅಧಿಕಾರ ಸಿಕ್ಕಾಗ ಆದಷ್ಟೂ ಜನಪರ ಕೆಲಸ ಮಾಡಿದರೆ ಅಧಿಕಾರದಿಂದ ಇಳಿದ ಮೇಲೆಯೂ ಅದೇ ಗೌರವ ಉಳಿಸಿಕೊಳ್ಳಲು ಸಾಧ್ಯ. ಇಲ್ಲದಿದ್ದರೆ ನಹುಷನಂತೆ ಶಾಪಗ್ರಸ್ಥರಾಗಿ ಶಾಪವಿಮೋಚನೆಗಾಗಿ ಕಾಯಬೇಕಾಗುತ್ತದೆ.  ತಾನು ಕುಳಿತ ಸ್ಥಾನ ತನ್ನದಲ್ಲದಿದ್ದರೂ ಸಹ ಮನಸ್ಸಿಗೆ ಬಂದಂತೆ ಅಧಿಕಾರ ಚಲಾಯಿಸಿ ಪೇಚಿಗೆ ಸಿಲುಕಿಕೊಂಡ ನಹುಷನ ಕಥೆ ಹೀಗಿದೆ.  ಒಮ್ಮೆ ದೇವೇಂದ್ರನಿಗೆ ಬ್ರಹ್ಮಹದೋಷ ಉಂಟಾಯಿತು.  ಅದರ ನಿವಾರಣೆಗಾಗಿ‌ ದೇವೇಂದ್ರ ಪಾಪ ಪರಿಹಾರಕ್ಕಾಗಿ ಸಂಕಲ್ಪದಲ್ಲಿದ್ದಾಗ, ಸ್ವರ್ಗವನ್ನು ಖಾಲಿ ಬಿಡಲಾಗದೇ ನಹುಷನನ್ನು ಕರೆತಂದು ದೇವೇಂದ್ರನ ಸ್ಥಾನದಲ್ಲಿ ಕುಳ್ಳಿರಿಸಲಾಗುತ್ತದೆ.  ಅಧಿಕಾರ ಎನ್ನುವುದು ಇಂದ್ರನಿಗೇ ಶಾಶ್ವತವಲ್ಲ . ಇನ್ನು ಇಂದ್ರನ ಬದಲು‌ ಕುಳಿತವರಿಗೆ ಶಾಶ್ವತವೇ? ಇಂದಲ್ಲ ನಾಳೆ ದೇವೇಂದ್ರ ವಾಪಸ್ ಬಂದಾಗ ಆ ಸ್ಥಾನವನ್ನು ನಹುಷ ಬಿಟ್ಟು ಕೊಡಲೇಬೇ...